KTV Association - ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್
  • ಹೋಂ
  • ನಮ್ಮ ಕುರಿತು
    • ನಮ್ಮ ಪದಾಧಿಕಾರಿಗಳು
  • ಕಾರ್ಯಕ್ರಮಗಳು
  • ಯೋಜನೆಗಳು
  • ಲೇಖನಗಳು
  • ಸುದ್ಧಿಗಳು
  • ಮ್ಯಾಗಝಿನ್
  • ಗ್ಯಾಲರಿ
    • ಫೋಟೋಗಳು
    • ವೀಡಿಯೊಗಳು
  • ಸಂಪರ್ಕಿಸಿ
No Result
View All Result
KTV Association - ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್
  • ಹೋಂ
  • ನಮ್ಮ ಕುರಿತು
    • ನಮ್ಮ ಪದಾಧಿಕಾರಿಗಳು
  • ಕಾರ್ಯಕ್ರಮಗಳು
  • ಯೋಜನೆಗಳು
  • ಲೇಖನಗಳು
  • ಸುದ್ಧಿಗಳು
  • ಮ್ಯಾಗಝಿನ್
  • ಗ್ಯಾಲರಿ
    • ಫೋಟೋಗಳು
    • ವೀಡಿಯೊಗಳು
  • ಸಂಪರ್ಕಿಸಿ
No Result
View All Result
KTV Association - ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್
No Result
View All Result

ಕೆಟಿವಿಎ ಗೆ ಹೊಸಾ ಕಛೇರಿ ಸಿಕ್ತು ಸಧ್ಯದಲ್ಲೇ ಶಿಫ್ಟು !

ಎಂ ಎಲ್ ಪ್ರಸನ್ನ

September 24, 2023
0 0

ಕೆಟಿವಿಎ ಸದಸ್ಯರು ಎಲ್ಲರಲ್ಲಿಯೂ ಹಂಚಿಕೊಳ್ಳಬೇಕಾದ ಸಂತಸದ ಸುದ್ದಿಯೊಂದು ಇಲ್ಲಿದೆ.

ಇಷ್ಟು ವರುಷ ಸಂಘಕ್ಕೆ ಅಚ್ಚುಕಟ್ಟಾದ, ಅನುಕೂಲಕರವಾದ ಕಚೇರಿ ದೊರೆತಿರಲಿಲ್ಲ. ಹಾಗಾಗಿ ಕಚೇರಿಯ ಕಡೆತಗಳನ್ನು, ಇತರೆ ದಾಖಲೆಗಳನ್ನು, ಪೀಠೋಪಕರಣ ಇತ್ಯಾದಿಗಳನ್ನು, ಅಚ್ಚುಕಟ್ಟಾಗಿ ಜೋಡಿಸಿಕೊಳ್ಳಲು ಕೂಡ ಆಗುತ್ತಿರಲಿಲ್ಲ. ಈ ಸಮಸ್ಯೆಗೆ ಪರಿಹಾರ ಸೂಚಿಸಿದ್ದ ಕಾರ್ಯದರ್ಶಿಗಳಾದ ಸೃಜನ್ ಲೋಕೇಶ್ ಅವರು ಕತ್ರಿಗುಪ್ಪೆಯಲ್ಲಿ ವಿಶಾಲವಾದ ಆಫೀಸ್ ಒಂದನ್ನು ತೆರೆಯಲು ಅನುಕೂಲಗಳನ್ನು ಮಾಡಿಕೊಟ್ಟಿದ್ದರು. ಅದಕ್ಕೆ ಸಮಸ್ತ ಕೆಟಿವಿಎ ಸದಸ್ಯರನ್ನು ಚುನಾವಣೆಯ ನಂತರ ಆಹ್ವಾನಿಸಿ ವಿಜೃಂಭಣೆಯಿಂದ ಗೃಹಪ್ರವೇಶ ಕೂಡಾ ಮಾಡಲಾಗಿತ್ತು.

ಇದೀಗ ಇದು ಇನ್ನೂ ಒಂದು ಹಂತಕ್ಕೆ ಬಡ್ತಿ ಪಡೆದಿದೆ. ಬಹಳ ದಿನಗಳಿಂದಲೂ ಕರ್ನಾಟಕ ಟೆಲಿವಿಷನ್ ಕಲ್ಚರಲ್ ಕ್ಲಬ್ ಆವರಣದಲ್ಲಿ ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ಸಂಸ್ಥೆಗೆ ಒಂದು ಕಛೇರಿ ಜಾಗ ಕೊಡುವ ಕುರಿತು ಚರ್ಚೆಗಳು ನಡೆದಿದ್ದವು. ಕಾನೂನಾತ್ಮಕವಾದ ಪ್ರಕ್ರಿಯೆಗಳು ಅಡ್ಡ ಬಂದಿದ್ದರಿಂದ ಅದು ಸಾಕಷ್ಟು ಬಾರಿ ಮುಂದೆ ಹೋಗಿತ್ತು. ಆದರೆ ಈ ಬಾರಿ ಕೆಟಿವಿಎ ಆಡಳಿತ ಮಂಡಳಿ ಗಂಭೀರವಾದ ಪ್ರಯತ್ನಗಳನ್ನು ಮಾಡಿ ಕಲ್ಚರಲ್ ಕ್ಲಬ್‌ನ ಆಡಳಿತ ಮಂಡಳಿಯ ಮನವೊಲಿಸಲು ಮುಂದಾಯಿತು. ಎಷ್ಟೋ ವರುಷಗಳಿಂದ ದೂರಾಗಿದ್ದ ಒಂದೇ ಮನೆಯ ಅಣ್ಣತಮ್ಮಂದಿರು ಮತ್ತೆ ಒಂದಾದ ಹಾಗೆ ಈಗ ಕರ್ನಾಟಕ ಟೆಲಿವಿಷನ್ ಕಲ್ಚರಲ್ ಕ್ಲಬ್ ಕೆಟಿವಿಎ ಸಂಸ್ಥೆಯ ಜೊತೆ ಕೈಸೇರಿಸಿದೆ. ಸಂಸ್ಥೆಯ ಕಚೇರಿಗಾಗಿ ಅನುಕೂಲಕರವಾದ ಸ್ಥಳವನ್ನು ದೊರಕಿಸಿಕೊಟ್ಟಿದೆ. ಪ್ರಸ್ತುತ ಕತ್ರಿಗುಪ್ಪೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಛೇರಿಗಿಂತಲೂ ಹೆಚ್ಚು ವಿಶಾಲವಾದ ಕಚೇರಿಯನ್ನು ಅಲ್ಲಿ ನಿರ್ಮಿಸುವ ಆಲೋಚನೆಯಿಂದ ಅದಕ್ಕಾಗಿ ವಿಧ್ಯುಕ್ತವಾಗಿ ಪೂಜೆ ಸಲ್ಲಿಸಿ ಕಾಮಗಾರಿಗಳನ್ನು ಆರಂಭಿಸಲಾಗಿದೆ. ಅತಿ ಶೀಘ್ರದಲ್ಲಿಯೇ ಎಲ್ಲ ಕೆಲಸ ಕಾರ್ಯಗಳು ಮುಕ್ತಾಯವಾಗಿ ಸಂಸ್ಥೆಯು ಅಲ್ಲಿ ನಿರಂತರವಾಗಿ ಮತ್ತು ಯಾವುದೇ ಅಡ್ಡಿ ಆತಂಕಗಳಿಲ್ಲದೆ ಕಾರ್ಯನಿರ್ವಹಿಸಲು ಅನುಕೂಲವಾಗಲಿದೆ ಎಂಬ ಈ ವಿಷಯವನ್ನು ತಮ್ಮೆಲ್ಲರಿಗೆ ತಿಳಿಸಲು ಕೆಟಿವಿಎ ಕಾರ್ಯಕಾರಿ ಮಂಡಳಿ ಹರ್ಷಿಸುತ್ತದೆ. ಕೆಲವೇ ದಿನಗಳ ಹಿಂದೆ ಕಾಮಗಾರಿ ಆರಂಭಿಸುವ ಮುಂಚೆ ವಿಘ್ನನಿವಾರಕ ಶ್ರೀ ವಿನಾಯಕನ ಪೂಜೆಯನ್ನು ಸಾಂಗವಾಗಿ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಕೆಟಿವಿಎ ಅಧ್ಯಕ್ಷರಾದ ಶ್ರೀ ರವಿ ಆರ್ ಗರಣಿ, ಪದ್ಮಾವಾಸಂತಿ, ಗಣೇಶ್‌ರಾವ್, ಆನಂದ್, ಬುಕ್ಕಾಪಟ್ಟಣ ವಾಸು, ಭಾಸ್ಕರ್, ಸಂಜೀವ್ ತಗಡೂರ್, ಸತೀಶ್ ಕೃಷ್ಣನ್ ಸೇರಿದಂತೆ ಕೆಟಿವಿಎ ನ ಅನೇಕ ಹಿತೈಷಿಗಳು ಅಲ್ಲಿ ಸೇರಿ ಕಾಮಗಾರಿಗೆ ಶುಭ ಹಾರೈಸಿದರು. ಅದರ ಚಿತ್ರ ಮಾಲಿಕೆ ಇಲ್ಲಿ ನಿಮಗಾಗಿ.

ಎಂ ಎಲ್ ಪ್ರಸನ್ನ

ShareShareSendShareTweetSend

Leave a Reply Cancel reply

Your email address will not be published. Required fields are marked *

ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್

ಕನ್ನಡ ದೂರದರ್ಶನ ಉದ್ಯಮದಲ್ಲಿ ಕಲಾವಿದರು ಮತ್ತು ತಂತ್ರಜ್ಞರ ಕಲ್ಯಾಣವನ್ನು ಉತ್ತೇಜಿಸುವ ಉದ್ದೇಶದಿಂದ ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ಅಸ್ತಿತ್ವಕ್ಕೆ ಬಂದಿದೆ.

ಕ್ವಿಕ್ ಲಿಂಕ್ಸ್

  • ನಮ್ಮ ಕುರಿತು
  • ಯೋಜನೆಗಳು
  • ಕಾರ್ಯಕ್ರಮಗಳು
  • ಲೇಖನಗಳು
  • ಸುದ್ಧಿಗಳು
  • ಸಂಪರ್ಕಿಸಿ

ಫಾಲೋ ಅಸ್

ಡೌನ್‌ಲೋಡ್ ಆಂಡ್ರಾಯ್ಡ್ ಅಪ್ಲಿಕೇಶನ್‌

  • ನಮ್ಮ ಕುರಿತು
  • ಸಂಪರ್ಕಿಸಿ
  • ಪ್ರೈವಸಿ ಪಾಲಿಸಿ

© 2022 - 2023, Karnataka Television Association All Rights Reserved. Design and Developed by: Ekaashara Infotech

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಹೋಂ
  • ನಮ್ಮ ಕುರಿತು
    • ನಮ್ಮ ಪದಾಧಿಕಾರಿಗಳು
  • ಕಾರ್ಯಕ್ರಮಗಳು
  • ಯೋಜನೆಗಳು
  • ಲೇಖನಗಳು
  • ಸುದ್ಧಿಗಳು
  • ಮ್ಯಾಗಝಿನ್
  • ಗ್ಯಾಲರಿ
    • ಫೋಟೋಗಳು
    • ವೀಡಿಯೊಗಳು
  • ಸಂಪರ್ಕಿಸಿ

© 2022 - 2023, Karnataka Television Association All Rights Reserved. Design and Developed by: Ekaashara Infotech