
ಸದಸ್ಯರಲ್ಲಿ ಮನವಿ;
ಕಾವೇರಿ ನೀರಿನ ಹೋರಾಟಕ್ಕಾಗಿ ನಾಳೆ ಬೆಂಗಳೂರು ಬಂದ್ ಗಾಗಿ ಬಹಳಷ್ಟು ಸಂಘಟನೆಗಳು ಕರೆ ನೀಡಿವೆ. ಇದಕ್ಕೆ ನಮ್ಮ ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ಕೂಡ ಬೆಂಬಲ ಸೂಚಿಸಿದೆ. ಆದುದರಿಂದ ನಾಳೆ ನಡೆಯುವ ಈ ಬಂದ್ ಗಾಗಿ ಎಲ್ಲರೂ ಚಿತ್ರೀಕರಣ ನಿಲ್ಲಿಸಿ ನಮ್ಮ ಬೆಂಬಲ ಸೂಚಿಸೋಣ. ನಾಳೆ ಚಿತ್ರಿಕರಣ ನಡೆಯುವಾಗ ಅಕಸ್ಮಾತ್ ಆಗುವ ಅಹಿತಕರ ಘಟನೆಗಳು ಬೇರೆ ರೀತಿಯ ಪರಿಣಾಮ ಬೀರಬಾರದು ಎಂಬ ಉದ್ದೇಶ ನಮ್ಮದಾಗಿದೆ. ನಮ್ಮ ನೆಲ ಜಲ ನಾಡಿನ ಹಿತ ರಕ್ಷಣೆ ನಮ್ಮ ಆದ್ಯ ಕರ್ತವ್ಯವಾಗಿದೆ.
ಬನ್ನಿ ನಾಳೆ ಬೆಳಿಗ್ಗೆ 10 ಗಂಟೆಗೆ ಕಾರ್ಪೊರೇಷನ್ ಬಳಿ ಇರುವ ಟೌನ್ ಹಾಲ್ನಲ್ಲಿ ಎಲ್ಲರೂ ಸೇರೋಣ ಕಾವೇರಿ ಹೋರಾಟಕ್ಕೆ ಬೆಂಬಲ ಸೂಚಿಸೋಣ.
